Udayavani: ಕಾಲೆಳೆಯುವಾಟ
ಕಾಲೆಳೆಯುವಾಟ! -ಎಸ್.ಜಿ.ಶಿವಶಂಕರ್ ವಿಶ್ವ ಇಲ್ಲದ ಮೀಸೆಯನ್ನು ತಿರುವಿದ! ವಿಶಾಲೂ ಹಣೆ ಚಚ್ಚಿಕೊಂಡಳು! ವಿಶ್ವನ ಇಬ್ಬರು ಮಕ್ಕಳು ಪಿಂಕಿ ಮತ್ತು ಪಲ್ಲಿ ಕಕ್ಕಾಬಿಕ್ಕಿಯಾದರು! ಎರಡು ಸಾವಿರ ರೂಪಾಯಿ ಕಕ್ಕಿ ಎಲ್ಲ ಕಕ್ಕಾಬಿಕ್ಕಿಯಾಗುವಂತ, ಬೇಟೆಗಾರರು ಉಪಯೋಗಿಸುವಂತ ಬೂಟುಗಳನ್ನು ವಿಶ್ವ ಕೊಂಡು ತಂದಿದ್ದ! `ಇದು ಅತಿಯಾಯ್ತು, ಈ ಹಣಕ್ಕೆ ಒಂದು ರೇಷ್ಮೆ ಸೀರೆ ಬರ್ತಿತ್ತು!’ ವಿಶಾಲೂ ಉದ್ಗರಿಸಿದಳು! `ಒಂದು ಸ್ಟೋನ್ ವಾಷ್ ಜೀನ್ಸು, ನಾಲ್ಕು ಟೀ ಷರ್ಟು ಬರುತ್ತಿತ್ತು! ಅಪ್ಪ ಖರ್ಚು ಮಾಡಿದ ಹಣಕ್ಕೆ!’ ವಿಶ್ವನ ಮಗನ ಉದ್ಗಾರ! ‘ಒಂದು ಗ್ರಾಂಡ್ ಆಗಿರೋ ಡ್ರೆಸ್ ಮೆಟೀರಿಯಲ್ ಬರ್ತಿತ್ತು’ ಪಿಂಕಿ ಕೊರಗಿದಳು. `ಹೌದು ನೀವು ಹೇಳೋದೆಲ್ಲಾ ಬರ್ತಿತ್ತು! ಆದರೆ ಇಂತಾ ಷೂಸು ಬರ್ತಿದ್ದವಾ..?’ ರೇಗಿದ ವಿಶ್ವ, ಧೈರ್ಯ ಮಾಡಿ! `ಬರ್ತಿರಲಿಲ್ಲ ನಿಜ! ಆದರೆ ಇಂತಾ ದರಿದ್ರದ ಶೂಸು ನಿಮಗೆ ಯಾಕೆ ಬೇಕಿತ್ತು..?’ `ಮತ್ತೆ ಫ್ಯಾಕ್ಟ್ರೀಲಿ ಕಾಲೆಳೆಯುತ್ತಾರಲ್ಲ...... ಆಗ ಬೀಳದೆ ಗಟ್ಟಿಯಾಗಿ ನೆಲದ ಮೇಲೆ ನಿಂತ್ಕೊಳ್ಳೋದಕ್ಕೆ ಇಂತಾ ಬೂಟುಗಳು ಬೇಕೇಬೇಕು!’ `ಏನು ಕಾಲೆಳೆಯೋದೆ..? ಏನು ಕಬಡ್ಡಿ ಆಡ್ತಾರಾ..?’ ವಿಶಾಲೂ ಅರ್ಥವಾಗದೆ ಕೇಳಿದಳು. `ಹೌದು ಅದು ಕಬಡ್ಡೀನೆ! ಆದರೆ ಕಬಡ್ಡಿ ಕಬಡ್ಡಿ ಅಂತ ಹೇಳೋದಿಲ್ಲ ಅಷ್ಟೆ! ಸಡನ್ನಾಗಿ ಕಾಲೆಳೆದುಬಿಡ್ತಾರೆ’ `ಹಾಗಿದ್ದರೆ ಕಾಲಿಗೆ ಎಣ್ಣೆ ಸವರ